Apr 22, 2026

ಬಾಸಮ್ಮನ ಭಕ್ತಿಯ ಬೆಳಕೊಂದೆ

 ಹಬ್ಬ ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು.. 

ಮುಂಗಾರು ಮಳೆಗೆ  ಜೀವ ಗೊಂಡ ಮಂಡೂಕ ವಟಗುವ ಪರಿ

ಸುಪ್ತವಾಗಿದ್ದ ಊರು ಸಾವಿರಗಳು ಜೀವ ತುಂಬಿವೆ. 

ತವರಿಗೆ ಮರಳಿದ ಮಕ್ಕಳು, ಕಂಕುಳ ಮರಿ ಪಿಳ್ಳೆಗಳು

ಚಿಲಿಪಿಲಿ ಗುಟ್ಟುತ ಅಳುತ ಚೀರುತ ಮುಡಿ ಕೊಡುವ ಗಮ್ಮತ್ತು. 

ಚಾಪೆಲಿ ಮಲಗಿ, ಚಪ್ಪಲಿ ತೊರೆದು, ಮಡಿ ಯಲಿ ಮಿಂದು, 

ತಿಂದು ತಂಬಿಟ್ಟು ಉಪವಾಸ ಮಿಕ್ಕೊತ್ತು. 


ತಾಯ ನೋಡಲು ಸೇರುವ ಜನ ಸಾವಿರ 

ವರುಷದಿ ಒಮ್ಮೆ ಹರ್ಷೋದ್ಗಾರ

ನೋಡಿ ಅಮ್ಮನ ಸಿರಿ ಸಿಂಗಾರ. 

ಹಗಲು, ಇರುಳು ಬನಸುಗ್ಗಿ, ಮುನ್ನ ನಡೆದ ಹೊನ್ನಾರ. 

ಮುಗಿಯದೆ ಹೋಗದೆ ಸುಗ್ಗಿ ಹಬ್ಬ!!

ಮುಡಿ ಇಳಿಯಲೊಲ್ಲರು ಅಮ್ಮಂದಿರು. 

ಬಿಟ್ಟು ಕಳಿಸುವ ಕಣ್ಣೀರು ಮಕ್ಕಳದು. 


ಮತ್ತೆ, ಬೇಸಿಗೆ ಮುಗಿದು, ಮಳೆ ಭಯಂಕರ

ಮಲೆನಾಡ ಮಳೆ, ಭೂ ಗರ್ಭದೊಳಗೆ ಇಳಿದರಷ್ಟೆ 

ವರುಷ ಪೂರ್ತಿ ಹರಿಯುವ ಹೊಳೆ. 

ಕೇಳ ಬೇಕಿಲ್ಲ ಮಳೆಯ ಆರ್ಭಟ

ಮುಂಗಾರು ಮುಗಿದು ಬದುಕಿ ಬರುವ ಪ್ರತಿವರ್ಷ

ನಮಿಸದಿರರು ಮಲೆನಾಡ ಸಪ್ತ ಮಾತೆಯರ,ಅಷ್ಟ ಭೈರವರ


ಹಬ್ಬ  ಬಂತೆಂದರೆ ಊರು ಗಿಜಿ-ಗಿಜಿ ಗುಜು-ಗುಜು

ಇಲ್ಲದೆ ಹೋದರೆ ಏನಿದೆ ಜೀವನ? ನಶ್ವರ, ನಿರಾಕರ. 

ಬಾಸಮ್ಮನ ಭಕ್ತಿಯ ಬೆಳಕೊಂದೆ ಕತ್ತಲ ಅಡವಿಯ ಜೀವನಾಧಾರ🙏

#TripuraSaviraSuggi #HagaluSuggi #Jatre #23rdApril2026 #Today #Basamma #Sablamma #komaraswami #Balalikamma

May 17, 2025

ತ್ರಿಪುರ ಸಾವಿರ ಸುಗ್ಗಿ ಬಲು ವಿಷೇಶ

ಯಾ ದೇವೀ ಸರ್ವಭೂತೇಷು ಶಾಂತಿರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಎಲ್ಲರೋಳಗೂ ಇದ್ದು ನಮ್ಮೂರ ಬಾಸಮ್ಮನೂ ಆಗಿರುವ ಆ ದೇವಿಗೆ ಕೋಟಿ ಪ್ರಣಾಮ ಗಳು. ಮಲೆಕುಡಿಯರಿಂದ ಪೂಜಿಸಲ್ಪಡುವ ದೇವಿ.  ಹೊಯ್ಸಳ ಬಲ್ಲಾಳನು ಇತ್ತ ಬಂಗಾರದ ಮುಖವನ್ನು ದರಿಸಿದ ದೇವಿ. ಸಪ್ತ ಮಾತೃಕೆಯರಾಗಿ ಅಕ್ಕನಿಗೆ ತಂಗಿಯೂ, ತಂಗಿಗೆ ಅಕ್ಕನೂ ತಾನಾಗಿ. ಕುಮಾರನೊಲ್ಮೆಯ ಅಮ್ಮ ಬಾಸಮ್ಮನಿಗೆ ಕೋಟಿ ಪ್ರಣಾಮಳು.

ಈ ವರ್ಷ 2025ರ ತ್ರಿಪುರ ಸಾವಿರ ಸುಗ್ಗಿ ಬಲು ವಿಷೇಶ. ಸ್ವರ್ಣ ಮುಖ ಮುದ್ರೆಯ ಅಕ್ಕ ಬಾಸಮ್ಮ ಜೊತೆಗೆ ತಂಗಿ ಸಬ್ಲಮ. ಇರ್ವರ ಸೆರಗ ಮರೆಯಲಿ ಪುಟ್ಟ ಕುಮಾರ. ಇವರ ಸಂಚಾರ ಹೊನ್ನಾರದ ದಿನ ಮಂಗಳವಾರ ನೋಡುವುದೇ ಸ್ವರ್ಗ. ತ್ರಿಪುರ ಸಾವಿರದ, ತ್ರಿಪುರ ಸುಂದರಿ ನಮ್ಮಮ್ಮ ಬಾಸಮ್ಮ. ಈಕೆಯ ಸ್ವರ್ಣ ಮುಖದ ಸೌಂದರ್ಯ, ನೋಡಿದವರಷ್ಟೇ ಬಲ್ಲರು. ನೋಡದವರು ಹೊರನಾಡು ಅನ್ನಪೂರ್ಣೇಶ್ವರಿ ತಾಯಿಯನ್ನು ಒಮ್ಮೆ ಕಣ್ಣ ಎದುರು ತನ್ನಿ. ಆ ತಾಯಿಯ ಬಂಗಾರದ ಮುಖ ಮೂರ್ತಿ ಹೋಲಿಕೆಗೆ ಬರಬಹುದು!!

ರಾಜ ಬಲ್ಲಾಳನೊ? ಬ್ರಾಹ್ಮಣ ಜೋಯಿಸನೊ? ನಿರಾಕರಿಸಿ ನಿರ್ನಾಮರಾದ ಜೈನ ದೊರೆಗಳೊ? ಯಾರು ಹೊತ್ತಿಲ್ಲ, ಹೆಗಲು ಕೊಟ್ಟಿಲ್ಲ ಹೇಳಿಬಾಸಮ್ಮನ ಉತ್ಸವಕ್ಕೆ? ಸಾವಿರ ವರ್ಷಗಳಿಂದ ಸಾಗಿ ಬಂದ ಈ ಪರಂಪರೆ 2025ರ ಸುಗ್ಗಿಯಲ್ಲಿ ಕುಂಬಾರಸೆಟ್ಟರಿಂದ ಇಬ್ಬರು ಬ್ರಾಹ್ಮಣ  ಕುಮಾರರ ಮುಡಿ ಏರಿತು. ಅದರಲ್ಲೂ ವಿಶೇಷವಾಗಿ ತಾಯಿ ಪಾರ್ವತಿ ಅಮ್ಮನಿಗೆ ಸ್ವತಃ ಕಾಲಭೈರವೇಶ್ವರನೇ ನಂದಿಯ ಕಳುಹಿಸಿದಂತೆ ದೇವರಮನೆ ಅರ್ಚಕರು ಆವೇಶಗೊಂಡು ಬಾಸಮ್ಮನ ಹೊತ್ತು ತಂದಿದ್ದು ಅವಿಸ್ಮರಣೀಯ. ಗುರುವಾರ ಮದ್ಯಾಹ್ನ ಕೊಟ್ರಕೆರೆ ಹಗಲು ಸುಗ್ಗಿ ಮಂದಿಯಲ್ಲಿ ಸಾವಿರಾರು ಜನ ಸೇರಿ ತಾಯಿಯನ್ನು ನೊಡುವ ನಿರೀಕ್ಷೆಯಲ್ಲಿದ್ದರು. ಗುತ್ತಿ ಪೂಜೆಗುಡಿಯಲ್ಲಿ ತಾಯಿಗೆ ಅಲಂಕಾರ, ಆರತಿ ಮಾಡಿ ಆಕೆಯನ್ನು ಹೊರಡಿಸುತಿದದ್ದು ಹಿರಿಯರಾದ ದೇವರ ಮನೆ ಅರ್ಚಕರು. ನಂತರ ಅಂದು ಕೊಂಡಂತೆ ಬಾಸಮ್ಮತಾಯಿಯ ಉತ್ಸವ ಮೂರ್ತಿಯನ್ನು ಹೊರ ಬೇಕಾದದ್ದು ಹೊಸದಾಗಿ ನಿಯೋಜಿತರಾದ ಬ್ರಾಹ್ಮಣ ಕುಮಾರ. ಈ ನಡುವೆ ವಯೋಸಹಜ ಬೆನ್ನು, ಸೊಂಟನೊವು ಎನ್ನುವ ದೇವರಮನೆ ಭಟ್ರು ಏಕಾಏಕಿ ತಾನೇ ಆಕೆಯನ್ನು ಹೊತ್ತು ಓಡೋಡಿ ಕೊಟ್ರಕೆರೆ ಸುಗ್ಗಿ ಮಂದಿಗೆ ಬಂದದ್ದು ದೈವಿಕ ಪ್ರೇರಣೆ. ಇದನ್ನು ಕಣ್ಣಾರೆ ಕಂಡು ಆನಂದಿಸಿದವರೆೇ ಧನ್ಯರು 🙏

ಇನ್ನು ಹಗಲು ಸುಗ್ಗಿಯಲ್ಲಿ ಸಾವಿರಾರು ಹೆಜ್ಜೆೇನುಗಳು ಎದ್ದಿದ್ದು. ದೇವರ ಸುತ್ತಲೂ ನಿಂತವರ ಮೈ-ಮುಖದ ಮೇಲೆ ನೊರಾರು ಸಂಖ್ಯೆಯಲ್ಲಿ ಕುಳಿತಿದ್ದು. ಏನೂ ಮಾಡಲಾಗದೆ 'ತಾಯಿ ಬಾಸಮ್ಮ', 'ತಾಯಿ ಬಾಸಮ್ಮ' ಹೀಗೆ ಆಕೆಯನ್ನೇ ಆಶ್ರಯಿಸಿ ನಿಂತು ಪಾರಾಗಿದ್ದು 😇 ಎಲ್ಲವೂವರ್ಷ ತ್ರಿಪುರ ಸಾವಿರ ಸುಗ್ಗಿಯ ವಿಶೇಷ.

ಶನಿವಾರಕ್ಕಾಗಲೆ ಹಬ್ಬ ಮುಗಿದೇ ಹೋಯಿತಾ !  ಎನ್ನುವ ಬೇಸರ. ಅಷ್ಟರಲ್ಲೇ ಮುಂಗಾರಿನ ಹನಿಗಳು ತೊಟ್ಟಿಕ್ಕಿವೆ💧. ಈ ಮಳೆಗೆ☔💦 ಉಳಿವವರೆಷ್ಟು ಅಳಿವವರೆಷ್ಷು ಗೊತ್ತಿಲ್ಲ. (ಮಲೆನಾಡಿನಲ್ಲಿ ಮಳೆಗೆ ಪರಲೋಕದ ಕಡೆಗೆ ಪಯಣಿಸುವವರೆ ಹೆಚ್ಚು) ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಹಾಗೆತಾಯಿಯ ಮೇಲೆ ನಂಬಿಕೆ ಇಟ್ಟು ಮುಂದೆ ಬದುಕೋಣ. ಬರುವ ಬೇಸಿಗೆಯ ಅಂತ್ಯಕ್ಕೆ ಅದೇ ಬಸವ ಜಯಂತಿಯನ್ನು ಕ್ಯಾಲೆಂಡರ್ನಲ್ಲಿ ಹುಡುಕಿ ಶನಿವಾರ ಹಬ್ಬ ಮಿಂದು, ಹಬ್ಬ ಮೆಟ್ಟಿ, ಮಂಗಳವಾರ ಕುಮಾರನ ಒಡಗೂಡಿ ತಾಯಿಯ ಪರಿವಾರವನ್ನು ಪರಿವಾರ ಸಮೇತ ನೋಡೋಣ 🥰 
ವರ್ಷಕ್ಕೊಮ್ಮೆ ಕಾಣುವ ಆಕೆಯ ಮುಖದ ಹೊಳಪನ್ನು ಮತ್ತೆ ಸ್ಮರಿಸುತ್ತ, ಯಾವ ದೇವಿ ಬಾಸಮ್ಮ, ಸಬ್ಲಮ್ಮ, ಬಳಲಿಕಮ್ಮ, ದೇವಿರಮ್ಮ, ಪದ್ಮಾವತಮ್ಮ ಹೀಗೆ ಸಹಸ್ರ ಹೆಸರುಗಳಲ್ಲಿ ವಿಷೇಶವಾಗಿ ಮಲೆನಾಡಿನಾದ್ಯಂತ ಪೂಜಿಸಲ್ಪಡುವಳೊ ಆಕೆಗೆ ಕೋಟಿ, ಕೋಟಿ ನಮನಗಳು. ☺🙏