Dec 4, 2013

ಓಟ

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನಾನೊಂದು ಟ್ರ್ಯಾಕಿನ ಮೇಲಿದ್ದೆ
ಎಲ್ಲರೂ ಓಡುತ್ತಿರಲು ನಾನೂ ಓಡಿದೆ
ದಾರಿಯಲ್ಲಿ ಒಬ್ಬೊಬ್ಬರೆ ಕುಸಿದು ಬಿದ್ದರು
ಹಾಗೇ ಹೊಸಬರು ಹುಟ್ಟಿಕೊಂಡರು
ನೋಡುತ್ತಲೇ ಓಡತೊಡಗಿದರು
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

ಅದೊಂದು ಗುಡ್ಡಗಾಡು ಓಟ.
ಸುತ್ತಲ ಸೌಂಧರ್ಯ ನಾನು ಸವಿಯಲಿಲ್ಲ.
ಬದಿಗೆ ಇದ್ದವರೊಡನೆ ಮಾತನಾಡಲು
ನನಗೆ ಸಮಯವೂ ಇರಲಿಲ್ಲ.

ನೋಡುತ್ತಲೆ ಕುಸಿದಳು ನನ್ನ ಹೆತ್ತವಳು.
ಓಡುತ್ತಲೆ ಕಣ್ಮರೆಯಾದರು ಒಡನಾಡಿಗಳು.
ಹುಟ್ಟುತಿದ್ದರು ಹೊಸಬರು ಕುಸಿಯುತಿದ್ದರು ಹಳಬರು.
ನಾನು ಓಡುತ್ತಲೇ ಇದ್ದೆ ಎಲ್ಲರೂ ಓಡುತ್ತಿರಲು.

ಅಂದು ನಾಹಾದ ದಾರಿಯಲ್ಲಿ
ಹಸಿರು ತುಂಬಿತ್ತು.
ತುಂತುರು ಉದುರುತಿತ್ತು.
ನಿಂತು ವಿಶ್ರಮಿಸಲಿಲ್ಲ.
ಹಣ್ಣು ಬಿದ್ದಿತ್ತು ಹೆಕ್ಕಿತಿನ್ನಲಿಲ್ಲ.
ಎಲ್ಲರೂ ನನ್ನೊಡನೆ ಇದ್ದರು
ಓಡುವುದ ಬಿಟ್ಟು ನಡೆಯ ಬಹುದಿತ್ತು
ನಡೆಯುತ್ತ ಹರಟ ಬಹುದಿತ್ತು.
ಅರಿವಿಗೇ ಬರಲಿಲ್ಲ.

ನಾನು ಯಾರು ಎಲ್ಲಿಂದ ಬಂದೆ ಗೊತ್ತಿಲ್ಲ
ಹಿಂದಿನ ನೆನಪಿಲ್ಲ ಮುಂದಿನ ಅರಿವಿಲ್ಲ
ಸದ್ಯಕ್ಕೆ ನನ್ನವರು ನನ್ನ ಜೊತೆಗಿದ್ದರು
ಓಟನಿಲ್ಲಿಸಿ ನಡೆದು ಬರಬಹುದಿತ್ತು.
ನಾನೂ ಓಡಿದೆ ಜೀವನವೆಲ್ಲ ಓಡಿದೆ
ಕೊನೆಗೆ ನಾನೂ ಕುಸಿದುಬಿದ್ದೆ
ಗುರಿ ಗರಿಗೇರಲಿಲ್ಲ ಓಡಿದಕಾರಣವೂ ತಿಳಿಯಲಿಲ್ಲ.

[ಆಧುನಿಕ ಜಗತ್ತಿನಲ್ಲಿ ಯಶಸ್ಸಿನ ಬೆನ್ನಹತ್ತಿರುವ ನಮಗೆ ಆಪ್ತರ ಪ್ರೀತಿ ವಾತ್ಸಲ್ಯ ಎಷ್ಟೋಬಾರಿ ಗೋಚರಿಸುವುದಿಲ್ಲ.
ಅಮ್ಮ ಅಪ್ಪ ಅಜ್ಜಿ ಅಜ್ಜ ಗೆಳೆಯ ಗೆಳತಿಯರೊಡನೆ ಪ್ರೀತಿಯಿಂದ ಸಮಯ ಕಳೆಯಲು ನಮಗೆ ಸಾದ್ಯವಾಗುವುದಿಲ್ಲ.
ಕೊನೆಗೆ ಯಶಸ್ಸು ದಕ್ಕಿದರೂ, ಸಂತಸ ಹಂಚಿಕೊಳ್ಳಲು ಎಷ್ಟೋಬಾರಿ ಕಾರಣಕರ್ತರೆ ಬದುಕಿರುವುದಿಲ್ಲ.

ಈ ಗಳಿಗೆ ನೀವು ಟ್ರ್ಯಾಕಿನಲ್ಲಿ ಇದ್ದ ಪಕ್ಷ ಓಟನಿಲ್ಲಿಸಿ ನಿಮ್ಮವರೊಡನೆ ನೆಡೆಯುವುದು ಉತ್ತಮ.]

Dec 3, 2013

ನಮ್ಮೊಂದಿಗೆ- ಮೆಟ್ರೋ ಅಳಿಲು.

ನಾನು ಹುಟ್ಟಿದ್ದು ಇವತ್ತಿನ ಈ ಮೆಟ್ರೋ ಪಟ್ಟಣದಲ್ಲಿ.
ನನ್ನ ಮುತ್ತಾತಂದಿರೂ ಇಲ್ಲಿಯವರೆ ಆದರೆ ಅಂದು ಇದು ಗೊಂಡಾರಣ್ಯ.
ಜರಿ ತೊರೆ ಜೀವ ಜಂಗುಲ.
ತಿಂದಸ್ಟೂ ಮುಗಿಯದ ಕಾಡ ಹಣ್ಣು
ಕುಡಿದಸ್ಟು ನೀರು ಎಲ್ಲೆಲ್ಲೂ ಹಸಿರು
ಅವೆಲ್ಲ ನನಗೆ ಕತೆ ಮಾತ್ರ
ನನ್ನ ಬಾಲ್ಯದಲ್ಲಿ ಕುಡಿಯಲು ನೀರಾದರು ಸಿಗುತಿತ್ತು.
ಸದ್ಯಕ್ಕೆ ನೀರು ಕಾಣದೆ ದಿನಗಳೆ ಆಗಿವೆ
ನನ್ನ ಜೊತೆಗಾರರು ಬಾಯಾರಿ ಕಣ್ಣ ಮುಚ್ಚಿದರು.
ಮನೆ ಒಡತಿ ನಳವನ್ನ ಮರೆತು ಮುಚ್ಚದಿದ್ದರೆ ಬಾಯಿಗೆ ನೀರು.
ಅಂಗಡಿಯಲ್ಲಿ ಕಾಣುವ ಬಾಟಲ್ ನೀರಂತೂ ನಮ್ಮ ಹಗಲುಗನಸು.
ಸರ್ಕಾರ ಈ ಬಗ್ಗೆ ಚಿಂತನೆನಡೆಸಿ ನಮ್ಮಗಳ ಬದುಕನ್ನ ಉಳಿಸ ಬೇಕಾಗಿ ಇಲ್ಲಿ ನಮ್ಮ ವಿನಂತಿ.
ಕೊನೆಪಕ್ಷ ಮೆಟ್ರೋ ಜನ ಒಂದು ಬಟ್ಟಲು ನೀರನ್ನಾದರು ಹೊರಗಿಡಬಹುದೆಂದು ಹಾರೈಸುವ.

ಅಳಿದುಳಿದ ಮೆಟ್ರೋ ಜೀವಿಗಳು.

 


Dec 2, 2013

ಮಾಲ್ಗುಡಿ ಡೇಸ್ - ಸ್ವಾಮಿ ಮತ್ತು ಫ್ರೆಂಡ್ಸ್..

ಎಷ್ಟು ವಿಪರ್ಯಾಸ ನೋಡಿ ಆಡುತಲ್ಲೇ ಬೆಳೆದು ದೊಡ್ಡವರಾದ ನಾವು  ಬಂದ ದಾರಿಯನ್ನೇ ಮರೆತಿದ್ದೇವೆ. ಅಷ್ಟೇ ಅಲ್ಲ ನಮ್ಮ ಬಳಿ ಈಗ ಸಮಯವೂ ಇಲ್ಲ, ನೆಮ್ಮದಿಯೂ ಇಲ್ಲ, ಬದುಕೊಂದು ಓಟವಾಗಿ ಮಾರ್ಪಟ್ಟಿದೆ. ಆದರೆ ಪ್ರತಿಯೊಬ್ಬರಲ್ಲೂ ಒಬ್ಬ ಮಗು ಅಡಗಿದ್ದಾನೆ ಎಂಬುದು ನಿಜ. ಮಾಲ್ಗುಡಿ ಆ ನಿಮ್ಮ ಸುಪ್ತ ಮಗುವನ್ನು ಎಚ್ಚರಿಸಬಲ್ಲುದು.

ಮನೆ ಮಾತಾದ ಈ ಮಾಲ್ಗುಡಿ ಆರ್. ಕೆ ನಾರಾಯಣ ಅವರು ತಮ್ಮ ಕಾದಂಬರಿಯಲ್ಲಿ ನಮ್ಮೆಲ್ಲರಿಗೆ ಚಿತ್ರಿಸಿದ ಒಂದು ಸುಂದರ ಹಳ್ಳಿ. ನಕ್ಷೆಯಲ್ಲಿ ಕಾಣದ ಈ  ಮಾಲ್ಗುಡಿ ನಮ್ಮೊಳಗೆ ಅಡಗಿರುವುದು. ನಮ್ಮ ಬದುಕನ್ನೇ, ನಮ್ಮ ಬಾಲ್ಯವನ್ನೇ ತೆರೆದಿಡುವುದು. ಈ ಕಾದಂಬರಿಯನ್ನು ನಮ್ಮ ಮೆಚ್ಚಿನ ಶಂಕರ್ ನಾಗ್ 'ಮಾಲ್ಗುಡಿ ಡೇಸ್' ಅನ್ನುವ ದಾರವಾಹಿಯನ್ನಾಗಿ ನಿರ್ಧೇಶಿಸಿ ನಿರ್ಮಿಸಿದ್ದರು, ಹಿಂದಿಯಲ್ಲಿ ಹೊರಬಂದ ಈ 'ಮಾಲ್ಗುಡಿ ಡೇಸ್' ನೋಡದವರೆ ಇಲ್ಲ ಎನ್ನಬಹುದು!  ಆದರೆ ನಾನಂತು ನೋಡಿರಲಿಲ್ಲ! ನೋಡಬೇಕೆನ್ನುವ ಆಸೆ ನನ್ನಲಿದ್ದ ಕಾರಣ ನೋಡದೆ ಬಿಡಲಿಲ್ಲ. 

ನನಗೆ ಈ ಕತೆಯು ನ್ಯಾಚುರಲ್ ಆಗಿ ಕಂಡು ಬಂತು. ಈ ದಾರವಾಹಿಯನ್ನು ನೋಡುತ್ತಾ ಹೋದಂತೆ ನೀವೊಂದು ಬೇರೆ ಜಗತ್ತಿಗೆ ಹೋದ ಅನುಬವ ಉಂಟಾಗುತ್ತದೆ. ಆ ಜಗತ್ತು ಮತ್ತಾವುದು ಅಲ್ಲ ನಿಮ್ಮ ಬಾಲ್ಯದ ದಿನಗಳೆ. ಅಮ್ಮ-ಅಪ್ಪ ಅಜ್ಜಿ-ಅಜ್ಜನ ನೆನಪುಗಳು, ಶಾಲೆಯ ಮಾಸ್ಟ್ರ ಬೆತ್ತದ ಬಿಸಿಯ ಅನುಬವ, ಬಾಲ್ಯದ ಪುಟ್ಟ ಸಮಸ್ಯೆಗಳು, ಅಂದಿನ ನಮ್ಮ ಕಲ್ಪನಾಲೋಕ ಇವುಗಳನ್ನೆಲ್ಲ ನೆನಪಿಸಬಲ್ಲ ಚಿತ್ರ ಮಾಲ್ಗುಡಿ.

 'ಸ್ವಾಮಿ ಮತ್ತು ಫ್ರೆಂಡ್ಸ್' ಇದರ ಮೊದಲ ಕಂತು.  ಕತೆಯನ್ನಂತೂ  ನಾನಿಲ್ಲಿ ಹೇಳಹೊರಟಿಲ್ಲ. ಏಕೆಂದರೆ ನೀವು ನೋಡಲೇ ಬೇಕಾದ ದಾರವಾಹಿ ಮಾಲ್ಗುಡಿ!. ನೋಡಿದವರು ಇನ್ನೋಮ್ಮೆ ನೋಡಿ ಬಿಡಿ, ಯುಟ್ಯೂಬ್ ವಿಡಿಯೊ ಕೊಂಡಿಯನ್ನು ಕೊನೆಯಲ್ಲಿ ಸೇರಿಸುತ್ತೇನೆ. ಶಂಕರ್ನಾಗ್ ಅವರ ನಿರ್ದೇಶನದ ವಿಶೇಷ, ಅವರ ಕಾದಂಬರಿಯ ಒಳನೋಟ, ಅನುಗುಣವಾಗಿ ಚಿತ್ರಿಸಿರುವ ಸನ್ನಿವೇಷಗಳು ಅಮೋಗವಾಗಿವೆ. 'ಸ್ವಾಮಿ ಅಂಡ್ ಫ್ರೆಂಡ್ಸ್' ನಿಮ್ಮನ್ನ ನಿಮ್ಮ ಬಾಲ್ಯಕ್ಕೆ ಒಯ್ಯುವುದಂತು ನಿಜ. ಬಾಲ್ಯದ ಆಸೆಗಳು, ಕೌತುಕಗಳು, ಭಯಗಳನ್ನೊಳಗೊಂಡು, ಗೆಳೆತನ, ಅಜ್ಜಿ ತಾತನ ನೆನಪುಗಳನ್ನು ನಿಮ್ಮ ಕಣ್ಮುಂದೆ ತರಬಲ್ಲುದು.

ಬಾಲ್ಯ ನಗು ಅಳುಗಳ ಸಮ್ಮಿಲನ.
ಒಂದು ಗಳಿಗೆಯ ಕುಸ್ತಿ ಮತ್ತೆ ದೋಸ್ತಿ..
ತಿಳಿಯದ ಪ್ರಪಂಚ..
ಕುತೂಹಲ..
ಇವುಗಳನ್ನೆಲ್ಲ 'ಶಂಕರ್ನಾಗ್' ಸೂಕ್ಷ್ಮವಾಗಿ ಗಮನಿಸಿ ಕತೆಗೆ ಜೀವತುಂಬಿದ್ದಾರೆ.

'ಸ್ವಾಮಿ' ಆಗಿ ಕಾಣಿಸಿಕೊಳ್ಳುವ ಪುಟ್ಟ ಹುಡುಗ ಮಾಸ್ಟರ್ ಮಂಜುವಿನ ನಟನೆ ಪರ್ಫೆಕ್ಟ್! ಚಿಕ್ಕವಯಸ್ಸಿನಲ್ಲಿ ಅಂತಹ ಕಲೆ ಅದ್ಬುತ.
ಹಳಿಯ ಬದಿಯಲ್ಲಿ ಅಳುತ್ತಾ ಕೂತಿದ್ದ ಸ್ವಾಮಿ ರೈಲು ಬಂದೊಡನೆ ಕಣ್ಣೊರೆಸುತ್ತಾ ತನ್ನ ಗೆಳೆಯನೊಡನೆ  ಸ್ವಾಮೀ.... ಎಂದು ಓಡುವ ಪರಿ ಕಣ್ಣ ಕಟ್ಟಿದೆ..


 
   





Oct 20, 2013

ಅವರು ಇವರು


ಇವರಿಗೂ ಒಬ್ಬನೆ ಮಗ
ಅವರಿಗೂ ಒಬ್ಬನೆ ಮಗ

ಇವರ ಮಗ ಗಾಳಿಪಟ ಹಾರಿಸುತ್ತನೆ
ತಾನೂ ಹಾರಲೆತ್ನಿಸಿ ಬೀಳುತ್ತಾನೆ
ಅವರ ಮಗ ಕಾಣೆಯಾಗಿ ವಾರಗಳೆ ಆಯಿತು
ಅವ ಹಾರುವುದ ಕಲಿತಿದ್ದ ಆದರೆ ರೆಕ್ಕೆ ಇನ್ನೂ ಬಲಿತಿರಲಿಲ್ಲ

ಇವರ ಮಗ ಪಟ್ಟಣದವ
ಅವರಮಗ ಹಳ್ಳಿಗ

ಇವರು ಸಿರಿವಂತರು
ಅವರು ಬಡವರು

ಇವರು ಮಾತು ಬಲ್ಲವರು
ಅವರು ಹಾಡಬಲ್ಲವರು

ಇವರ ಕತ್ತಲಿ ಚಿನ್ನದ ಸರ
ಅವರೊ ಬೆತ್ತಲೆ ಬದುಕುವವರು

ಇವರ ವಾಸ ಮಹಲಿನಲ್ಲಿ
ಅವರೊ ಮಳೆಯಲಿ ನೆಂದು ಬಿಸಿಲಲಿ ಒಣಗುವವರು

ಇವರ ಬಯಕೆಗೆ ಕೊನೆಯಿಲ್ಲ
ಅವರ ಬದುಕಲಿ ಬಯಕೆಯೆ ಇಲ್ಲ

ಇವರ ಮಗನ ಖುಷಿಗೆ ಅವರ ಮಗನ ತಂದಿಹರು
ಇವರ ಮಗನೊ ಮಹಡಿಯ ಮೇಲೆ ಗಾಳಿಪಟ ಹಾರಿಸುತಿರುವನು
ಅವರ ಮಗನೊ ರೆಕ್ಕೆ ಇದ್ದೂ ಹಾರಲಾರನು

ಇವರ ಮಗನನು ಕೂಗಿ ಅಮ್ಮ ಕರೆದಿಹಳು 'ಬಾ ತಿನ್ನು'
ಅವರ ಮಗನನು ಹುಡುಕುತ್ತ ಅಮ್ಮ ಕಾಡಲಿ ಕೂಗುವಳು

ಇವರ ಮಗನೊ ಮಹಡಿಯ ಮೇಲೆ ಗಾಳಿಪಟ ಹಾರಿಸುತಿರುವನು
ಅವರ ಮಗನೊ ರೆಕ್ಕೆ ಇದ್ದೂ ಹಾರಲಾರನು
ಪಂಜರದಲ್ಲಿಹನು

May 6, 2013

Final Call


What is the biggest loss for the mankind? For you and me at this very moment?
Is it the growth of oil price? Is it the failure of Apollo moon mission? What is it?
For a common individual like me these seems to be the considerable losses.
But it is certainly not!
If petrol finishes, there be a bio diesel.
Apollo fails curiosity succeeds.
If Einstein dies the next generation will have Einstein version 2.
If suppose human race itself disappears from the earth then there is no Einstein 2.
Humans are not going to disappear any way but the race of the distinct and extinct animals and birds.

“If a tree dies we can plant its seeds; if a bird dies we can hatch its eggs but if there is no egg as there is no seeds if the race be wiped out. Can we create it again like a doll?”

BT lab cannot create a sparrow without the sparrow remains. If it creates moreover it can never be a mother to teach sparrow to flutter.” 

It is not really as easy as we think life and relations. They too have beats the heart, feelings, family, besides right to live.

Can you spend a few moments of your busy life in watching this small audiovisual with your stereo on? They have something to tell you one last time.


Apr 7, 2013

Once lived in Arunachal

If you ask who is this man?
Then I would say God himself
Once lived in Arunachal
And lives in everyone’s heart
With him lived not only human

But birds, animals, snakes, trees
With love and harmony
If you want to see Ramana maharshi
No need of going to Arunachal
But go within you
Ask yourself who are you?
The I in you is the I in all
You see when you really want to see
The day you see the truth

I would say God himself   
Once lived in Arunachal now lives in you. 

Mar 10, 2013

Shiva



Shiva the god of death.
Who wants to worship death? Who likes to die?
Creation, sustenance, death.
What everybody hates is death.
      Dance of Shiva from "om namah shivay" title song Do yo remember this..?
If something is created it will be destroyed.
There is no death if there is no creation.
There is no creation having no death.
Death comes for anyone at anytime
It will take you unprepared.
Are you ready?

The individual self which is created cannot sustain long time.
As river flows into ocean every individual self merges into the immortal divinity
Into the lord Shiva through death. 


Death is the real birth where you die, I die, and we live.
If you can lead the life as you are going to die tomorrow then that is the day you really lived
That is how you worship Shiva.

“Om Namah Shivay”

Mar 7, 2013

ಮರೆಯಲಾರದ ಎವರ್ ಗ್ರೀನ್ ಹಾಡುಗಳು

ಮರೆಯಲಾರದ ಎವರ್ ಗ್ರೀನ್ ಹಾಡುಗಳು..
ಮಳೆಯೊಂದಿಗೆ ಮರುಕಳೆಸುವ ನೆನಪುಗಳು..

  
ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆ
ನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..

ಬಿಸಿಲಿಗೆ ಬಾಡಿದ್ದ ಹಸಿರು ಇಂದು ಮಳೆಯ ನೀರುಂಡು ಉಲ್ಲಾಸಿಸುತಿದೆ
ಚೈತನ್ಯವನ್ನ ಚೆಲ್ಲುತಿದೆ.


ಬನ್ನಿ ನಾವೂ ಧುಮುಕೋಣ ಈ ಭಾವ ಸಾಗರದಲ್ಲಿ..
ಹಾಡೋಣ ಭಾವದುತ್ತುಂಗದಲಿ..
ಬಾಗಿಯಾಗೋಣ ಪ್ರಕೃತಿ ಹಬ್ಬದಲಿ..
ಮಳೆಹನಿಗಳ ಚಟಪಟ ಸದ್ಧಿನಲಿ..


ತುಂತುರು ಅಲ್ಲಿ ನೀರ ಹಾಡು ಫ್ರಂಮ್ ಅಮೃತವರ್ಷಿಣಿ (1996)



ಸಾಹಿತ್ಯ : ಕೆ ಕಲ್ಯಾಣ್
ಸಂಗೀತ : ದೇವ
ಗಾಯನ: ಕೆ ಚಿತ್ರ

ತುಂತುರು ಅಲ್ಲಿ ನೀರ ಹಾಡು ಕಂಪನ ಇಲ್ಲಿ ಪ್ರೀತಿ ಹಾಡು ||೨||
ಹಗಲಿರಲಿ ಇರುಳಿರಲಿ ನೀನರದೆ ಹೇಗಿರಲಿ
ನನ್ನ ತುಂಬು ಹೃದಯ ನೀ ತುಂಬಿದೆ
ನಿನ್ನ ಈ ತುಂಬು ಪ್ರೀತಿಯನು ಕಣ್ಣ ಹಾಡಂತೆ ಕಾಯುವೆನು


ಗಗನದ ಸೂರ್ಯ ಮನೆಮೇಲೆ, ನೀ ನನ್ನ ಸೂರ್ಯ ಹಣೆ ಮೇಲೆ
ಚಿಲಿಪಿಲಿ ಹಾಡು ಎಲೆ ಮೇಲೆ, ನಿನ್ನ ಪ್ರೀತಿ ಹಾಡು ಎದೆ ಮೇಲೆ
ಗಾಳಿ ಗಾಳಿ ತಂಪು ಗಾಳಿ ಊರ ತುಂಬ ಇದೆಯೋ
ನಿನ್ನ ಹೆಸರ ಗಾಳಿಯೊಂದೆ ನನ್ನ ಉಸಿರಲ್ಲಿದೆಯೋ
ನಮ್ಮ ಪ್ರೀತಿ ಬೆಳಗೋ ಇತಿಹಾಸವು
ನಿನ್ನ ಸಹಚಾರವೇ ಚೈತ್ರ, ಅಲ್ಲಿ ನನ್ನ ಇಂಚರ ಅಮರ


ಚೆಲುವನೆ ನಿನ್ನ ಮುಗುಳುನಗೆ ಹಗಲಲು ಶಶಿಯು ಬೇಡುವನು
ರಸಿಕನೆ ನಿನ್ನ ರಸಿಕತೆಗೆ ಮದನನು ಮರುಗಿ ಸೊರಗುವನು
ತಾಯಿ ತಂದೆ ಎಲ್ಲಾ ನೀನೆ ಯಾಕೆ ಬೇರೆ ನಂಟು
ಸಾಕು ಎಲ್ಲ ಸಿರಿಗಳ ಮೀರೊ ನಿನ್ನ ಪ್ರೀತಿ ಗಂಟು
ಜಗವೆಲ್ಲ ಮಾದರಿ ಈ ಪ್ರೇಮವೆ
ನನ್ನ ಎದೆಯಾಳೊ ಧಣಿ ನೀನೆ, ನಿನ್ನ ಸಹಚಾರಿಣಿ ನಾನೆ

http://www.youtube.com/watch?v=yNkeWNMFtqE 



ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ ಫ್ರಂಮ್ ಮುಂಗಾರು ಮಳೆ




ಸಾಹಿತ್ಯ: ಯೋಗ್ ರಾಜ್ ಭಟ್
ಸಂಗೀತ: ಮಾನೋ ಮೂರ್ತಿ
ಗಾಯನ: ಸೋನು ನಿಗಮ್

ಮುಂಗಾರು ಮಳೆಯೆ ಏನು ನಿನ್ನ ಹನಿಗಳು ಲೀಲೆ
ನಿನ್ನ ಮುಗಿಲ ಸಾಲೆ, ಧರೆಯ ಕೊರಳ ಪ್ರೇಮದ ಮಾಲೆ,
ಸುರಿವ ಒಲುಮೆಯ ಜಡಿ ಮಳೆಯೆ,ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ | ಮುಂಗಾರು ಮಳೆಯೇ

ಭುವಿ ಕೆನ್ನೆ ತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬಾ ಅವಳು ಬಂದ ಹೆಜ್ಜೆಯ ಗುರುತು,
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ,
ಎದೆ ಮುಗಿಲಿನಲ್ಲಿ ರಂಗು ಚೆಲ್ಲಿ ನಿಂತಳು ಅವಳು,
ಬರೆದು ಹೆಸರ ಕಾಮನ ಬಿಲ್ಲು, ಏನು ಮೋಡಿಯೋ | ಮುಂಗಾರು ಮಳೆಯೆ


ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಾಗುವುದೋ,
ಯಾರ ಉಸಿರಲ್ಯಾರ ಹೆಸರೋ,ಯಾರು ಬರೆದರೋ,
ಯಾವ ಪ್ರೀತಿ ಹೂವು ಯಾರ ಹೃದಯದಲ್ಲರಳುವುದೊ,
ಯಾರ ಪ್ರೇಮ ಪೂಜೆಗೆ ಮುಡಿಪೊ, ಯಾರು ಬಲ್ಲರೋ | ಮುಂಗಾರು ಮಳೆಯೆ

ಒಲವ ಚಂದಮಾಮ ನಗುತ ಬಂದ ಮನದಂಗಳಕೆ,
ಪ್ರೀತಿ ಬೆಳಕಿನಲ್ಲಿ ಹೃದಯ ಹೊರಟಿತೇ ಮೆರವಣಿಗೆ,
ಅವಳ ಪ್ರೇಮದೂರಿನ ಕಡೆಗೆ,ಪ್ರೀತಿ ಪಯಣವೋ,
ಪ್ರಣಯದೂರಿನಲ್ಲಿ ಕಳೆದು ಹೋಗೊ ಸುಖವ ಇಂದು
ಧನ್ಯನಾದೆ ಪಡೆದುಕೊಂಡು, ಹೊಸ ಜನ್ಮವೊ | ಮುಂಗಾರು ಮಳೆಯೆ

http://www.youtube.com/watch?v=eUaoU3LcaWw




ನೂರು ಜನ್ಮಕು ನೂರಾರು ಜನ್ಮಕು ಫ್ರಂಮ್ ಅಮೇರಿಕಾ ! ಅಮೇರಿಕಾ !!

 


ನಿರ್ದೇಶನ : ನಾಗತಿಹಳ್ಳಿ ಚಂದ್ರಶೇಖರ್
ಗೀತ ರಚನೆ : ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ : ಮನೋ ಮೂರ್ತಿ
ಗಾಯನ : ರಾಜೇಶ್ ಕೃಷ್ಣನ್

ನೂರು ಜನ್ಮಕು ನೂರಾರು ಜನ್ಮಕು
ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೇ ಒಲಿದೊಲಿದು ಬಾರೆಲೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದು |೨|

ಬಾಳೆಂದರೆ ಪ್ರಣಯಾನು ಭಾವ ಕವಿತೆ ಆತ್ಮಾನು ಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓ. ಓ .ಓ .....
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ || ನೂರು ಜನ್ಮಕು ||


ಬಾ ಸಂಪಿಗೆ ಸವಿ ಭಾವ ಲಹರಿ ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲಾ ಓ. ಓ .ಓ .....
ಲೋಕದ ಸುಖವೆಲ್ಲಾ ನಿನಗಾಗಿ ಮುಡಿಪಿರಲಿ
ಇರುವಂತ ನೂರು ಕಹಿ ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗೂ  ಕಣ್ಣಾಗಿ  || ನೂರು ಜನ್ಮಕು ||

http://www.youtube.com/watch?v=OH9LH5oRZ-w



ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ಭಾವಗೀತೆ

                                 
  

ರಚನೆ: ಚೆನ್ನವೀರ ಕಣವಿ
ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||


ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||


ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||


ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ…. 

http://www.youtube.com/watch?v=l1inXiJC-b8  


ನೂರೊಂದು ನೆನಪು......,ಎದೆಯಾಳದಿಂದ.... ಫ್ರಂಮ್ ಬಂಧನ

                                   
ಸಂಗೀತ:ಎಂ.ರಂಗರಾವ್
ಸಾಹಿತ್ಯ:ಆರ್.ಏನ್.ಜಯಗೋಪಾಲ್
ನಿರ್ದೇಶನ:ರಾಜೇಂದ್ರಸಿಂಗ್ ಬಾಬು
ಗಾಯಕರು: ಎಸ್ ಪಿ ಬಾಲಸುಬ್ರಮಣ್ಯಂ,

ನೂರೊಂದು ನೆನಪು...,ಎದೆಯಾಳದಿಂದ...
ಹಾಡಾಗಿ ಬಂತು....ಆನಂದದಿಂದ...
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

ಒಲವೇಂಬ ಲತೆಯು,ತಂದಂತ ಹೂವು,
ಮುಡಿಯೇರೆ ನಲಿವು,ಮುಡಿ ಜಾರೆ ನೋವು,
ಕೈ ಗೂಡಿದಾಗ,ಕಂಡಂಥ ಕನಸು,
ಅದೃಷ್ಟದಾಟ ತಂದಂಥ  ಸೊಗಸು
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ಪ್ರೀತಿ ನಗುತಿರಲಿ,ಬಾಳು ಬೆಳಗಿರಲಿ,
ನೀವೆಂದು ಇರಬೇಕು ಸಂತೋಷದಿಂದ ...


ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ

ತುಟಿ ಮೇಲೆ ಬಂದಂತ ಮಾತೊಂದೇ ಒಂದು
ಎದೆಯಲ್ಲಿ 

ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು,
ಕೇಳಿ ಪಡೆದಾಗ ಸಂತೋಷವುಂಟು,
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನಿನ್ನ ಹರುಷದಲಿ,ನನ್ನ ಉಸಿರಿರಲಿ
ನನ್ನೆಲ್ಲಾ ಹಾರೈಕೆ  ಈ ಹಾಡಿನಿಂದಾ


ನೂರೊಂದು ನೆನಪು,ಎದೆಯಾಳದಿಂದ
ಹಾಡಾಗಿ ಬಂತು,ಆನಂದದಿಂದ
ಸಿಂಧೂರ ಬಿಂದು,ನಗಲಮ್ಮ ಎಂದು
ಎಂದೇನು ಇರಲಮ್ಮ ಈ ದಿವ್ಯ ಬಂಧಾ
ನೂರೊಂದು ನೆನಪು,ಎದೆಯಾಳದಿಂದ ಹಾಡಾಗಿ ಬಂತು,ಆನಂದದಿಂದ

http://www.youtube.com/watch?v=ehRUhC3sQPE

ಓಲ್ಡ್ ಇಸ್ ಗೋಲ್ಡ್..