Apr 16, 2014

ಪ್ಲಾನೆಟ್ ಎಕ್ಸ್ ಮತ್ತು ಹೊರ ಜಗತ್ತಿನ ಬುದ್ದಿಜೀವಿಗಳು -೧

ಷ್ಟೋ ಸಾವಿರ ವರ್ಷಗಳ ಹಿಂದೆ ನಾವಿರುವ ಈ ಭೂಮಿಯ ಮೇಲೆ ಮನುಷ್ಯರು ಬದುಕಿದ್ದರು, ನಮ್ಮ ಮುತ್ತಾತಂದಿರೆ ಎಂದಿಟ್ಟು ಕೊಳ್ಳಿ ಆದರೆ ಅವರು ನಮ್ಮ ನಿಜವಾದ ಪೂರ್ವಜರಲ್ಲ!! ಏಕೆಗೊತ್ತ ಅವರಿಗೂ ನಮ್ಮ ಈ ದೇಹಕ್ಕೂ ಯಾವುದೇ ಸಂಬಂಧವಿಲ್ಲ. ದೇಹದ ಯಾವುದೇ ಜೀನೂ ಅವರ ಜೀನನ್ನು ಹೋಲಲ್ಲ. ಆ ಜನಾಂಗ ನಮಗಿಂತ ಲಕ್ಷ ಪಟ್ಟು ಬುದ್ದಿವಂತ ಜನಾಂಗ. ನಮ್ಮ ಈ ರಾಕೇಟ್, ಕಂಪ್ಯೂಟರ್, ಫೇಕ್ ಮೂನ್ ಲ್ಯಾಂಡಿಂಗ್ ಎಲ್ಲಕಿಂತ ಮೀರಿದ ತಂತ್ರಜ್ಞಾನ; ನ್ಯೂಟನ್, ಐನ್‍ಸ್ಟೀನ್, ಹಾಕಿಂಗ್ ರಿಗೂ ಮೀರಿದ ವಿಜ್ಞಾನಿಗಳು ಸಿದ್ದಾಂತಗಳು ಅವರಲ್ಲಿತ್ತು. ನಾವು ಕಚ್ಚಾಡುವ ನೂರಾರು ಧರ್ಮಗಳನ್ನು ಮೀರಿಸುವ ಧರ್ಮ ಅವರಿಗೆ ತಿಳಿದಿತ್ತು. ಹಾಗಿದ್ದರೂ ಅದ್ದೆಂತಹ ಅಸಾಧಾರಣ ಶಕ್ತಿ ಆ ಬುದ್ದಿವಂತ ಜನಾಂಗ ವನ್ನ ಈ ಭುವಿಯಿಂದ ಮತ್ತು ನಂಮ್ಮಿಂದ ಕಣ್ಮರೆ ಆಗುಂತೆ ಮಾಡಿತು..! ಇದಕ್ಕೆ ಉತ್ತರ ನಿಂತ ನೆಲ. ಹೌದು ನಾವು ನಿಂತಿರುವ ಇದೇ ಭೂಮಿ ಅವರನ್ನ ಕಣ್ಮರೆ ಯಾಗಿಸಿತು.

ಬುದ್ದಿವಂತ ಜನಾಂಗಕ್ಕೆ ನಮ್ಮಂತೆಯೇ ಹಲವು ಪ್ರಶ್ನೆಗಳು ಕಾಡುತಿದ್ದವು..."ನಾವು ಎಲ್ಲಿಂದ ಬಂದವರು? "ಎಲ್ಲಿಗೆ ಸಾಗುತಿದ್ದೇವೆ? "ಈ ಆಧಿ ಅಂತ್ಯವಿಲ್ಲದ ವಿಶ್ವದಲ್ಲಿ ನಾವು ಒಬ್ಬಂಟಿಗಳೆ? "ನಮ್ಮಂತೆಯೇ ಪರಜಗತ್ತಿನಲ್ಲಿ ಜೀವಿಗಳಿರುವವೆ? "ಹಿಂದೆ, ನಾವು ಬದುಕುವ ಈ ಭೂಮಿಯ ಮೇಲೆ ಯಾರಾದರು ಬದುಕ್ಕಿದ್ದರ? "ನಮ್ಮ ಸಹಾಯಕ್ಕೆ ಯಾರಾದರು ಇದ್ದಾರ? "ನಮಗೂ ಅಂತ್ಯ ಇದೆಯ? "ನಾವು ಆರಾದಿಸುವ ದೇವರು ಅಸ್ಥಿತ್ವ ಹೋಂದಿದ್ದಾರ? "ದೇವರೇ ಸೃಷ್ಟಿಯ ಮೂಲವೆ? "ಹಾಗಾದಲ್ಲಿ ದೇವರನ್ನು ಸೃಷ್ಟಿಸಿದ ಕರ್ತೃಯಾರು? ಹೀಗೆ ಹತ್ತು ಹಲವು ಉತ್ತರಿಸಲಸಾಧ್ಯ ಪ್ರಶ್ನೆಗಳು. ಭಯ, ಹೆದರಿಕೆ, ಆತಂಕ ಆದರೂ ಪ್ರೀತಿ, ವಿಶ್ವಾಸವೆಂಬ ಮೌಲ್ಯಗಳ ಮೇಲೆ ಬದುಕು.

ನಾಂಗ ವಿಕಸನಹೊಂದುತ್ತಲೇ ಇತ್ತು. ಭೌದ್ದಿಕವಾಗಿ,ಮಾನಸಿಕ ವಾಗಿ ವಿಕಾಸಹೊಂದುತಿದ್ದ ಆ ಜನಾಂಗಕ್ಕೆ ಕಾಲಕ್ರಮೇಣ ತನ್ನ ಸಹಜೀವಿಗಳ ಬಗ್ಗೆ ಕಾಳಜಿ ಕಮ್ಮಿಯಾಗುತ್ತಾಬಂತು. ಅದೇ ವೇಗದಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಬಹಳ ಮುನ್ನಡೆ ಕಾಣುತಿತ್ತು. ನಮ್ಮ ಕೆಮಿಸ್ಟ್ರಿಯ ಬದಲಾಗಿ ಅವರಿಗೆ ಆಲ್ಕೆಮಿ ತಿಳಿದಿತ್ತು, ಗ್ರಹಗಳ ನಡುವಣ ಗುರುತ್ವ, ಅಣುಗಳ ಅನ್ ಸರ್ಟೈಂಟಿಯನ್ನೆಲ್ಲ ವಿವರಿಸಬಲ್ಲ ಏಕೈಕ ನಿಯಮ ಮತ್ತು ಸಮೀಕರಣ ಅವರಿಗೆ ತಿಳಿದಿತ್ತು. ಅಂದೂ ಕೂಡ ಅಧಿಕಾರ, ಐಶ್ವರ್ಯಕ್ಕಾಗಿ ಕಾದಾಟ ನಡೆದೇಯಿತ್ತು ಇವುಗಳಿಂದು ಭಯಾನಕ ಯುದ್ದಗಳೂ ಸಂಭವಿಸಿದ್ದವು.

ನರು ಕಾಲಕ್ರಮೇಣ ಬದಲಾಗುತ್ತ, ಸನ್ನಿವೇಶಕ್ಕೆ ತಕ್ಕನಾಗಿ ವರ್ತಿಸುತ್ತಾ ಸಮಾಜದಲ್ಲಿ ಸಾವು,ನೋವು,ಸುಖ,ದುಖಃ ಗಳು ಸಂಭವಿಸುತ್ತಿದ್ದರೂ ಅಂದಿನ ವಿಜ್ಞಾನಿಗಳು ಒಂದೇ ಮನಸ್ಸಿನಲ್ಲಿ ಯಾವುದೇ ಸಾಮಾಜಿಕ ಕಟ್ಟು ಕಟ್ಟಳೆ ಗಳಿಗೆ ಒಳಪಡದೆ ತಮ್ಮ ಸಂಶೋಧನೆಗಳನ್ನು ನೆಡೆಸುತ್ತಾಬಂದರು, ಅನೇಕ ಹೋಸ ಅವಿಶ್ಕಾರಗಳು ಸಂಭವಿಸಿದವು. ಹೋರಗ್ರಹಗಳಿಗೆ ತಲುಪುವಷ್ಟು ಸಾಮರ್ತ್ಯ ಉಳ್ಳ ರಾಕೇಟ್ ನಂತಹ ಉಪಕರಣಗಳು, ಸಂಪರ್ಕ ಮಾಧ್ಯಮಗಳು, ಹೀಗೆ ನಾವು ಇಂದು ಕಂಡಿರುವ ಅನೇಕ ತಂತ್ರಜ್ಞಾನವನ್ನು ಅವರು ಅಂದೇ ತಿಳಿದಿದ್ದರು. ಇನ್ನೂ ಅನೇಕ ವಿಷಯಗಳು ನಾವಿನ್ನೂ ಕಾಣಬೇಕಿರುವವೂ ಕಂಡುಕೋಂಡಿದ್ದರು.

ಹೀಗೇ ಜೀವನ ಸಾಗಿರಲು ಒಮ್ಮೆ ಒಬ್ಬ ಪ್ರಖ್ಯಾತ ಖಗೋಳ ವಿಜ್ಞಾನಿಯಿಂದ ನಮ್ಮ ಈ ಸೂರ್ಯನಿಂದ ೭೮೧ ನಿಮಿಷ ಜೋತಿರ್ವೇಗ ದೂರದಲ್ಲೋಂದು ಹೊಸ ಗ್ರಹ ಪತ್ತೆಯಾಯಿತು, ಆ ಪ್ಲಾನೆಟ್ ಎಕ್ಸ್ ಗೆ ಎರೆಡು ಉಪಗ್ರಹಗಳು ೪ ಗ್ರಹಗಳನ್ನೋಳಗೊಂಡಿರುವ ಸೌರವ್ಯೂಹ. ಆ ವ್ಯೂಹದ ಸೌರ ನಕ್ಷತ್ರ ನಮ್ಮ ಸೂರ್ಯನಿಗಿಂತ ಗಾತ್ರದಲ್ಲಿ ಮತ್ತು ವಯಸ್ಸಿನಲ್ಲಿ ಸ್ವಲ್ಪಚಿಕ್ಕದು. ಪ್ಲಾನೆಟ್ ಎಕ್ಸ್ ನಮ್ಮ ಭೂಮಿಯಂತೆಯೇ ಜೀವ ರಕ್ಷಣೆಗೆ ಯೋಗ್ಯ ಗ್ರಹ ಇಲ್ಲಿಯ ಒಂದು ಹಗಲು ನಮ್ಮನಾಲ್ಕು ಹಗಲಿಗೆ ಸಮ ಇನ್ನು ನೀರಿನ ಜೊತೆಯಲ್ಲಿ ಪಾದರಸದಂತಹ ವಸ್ತುವೋಂದಿದ್ದು, ಇದ್ದಿಲಿಗೆ ಯೋಗ್ಯವಾಗಿದ್ದಿತು.

ಪ್ಲಾನೆಟ್ ಎಕ್ಸನ ಶೂಧದ ೨೩ವರ್ಷಗಳ ಬಳಿಕ ಬುದ್ದಿಜೀವಿಗಳ ಈ ಜನಾಂಗ ತನ್ನ ಪ್ರಥಮಯಂತ್ರವನ್ನು ಯಶಸ್ವಿಯಾಗಿ ಆ ಹೋಸ ಗ್ರಹದಲ್ಲಿ ಇಳಿಸಿತು. ನಾಲ್ಕು ವರ್ಷಪ್ರಯಾಣಿಸಿ ಬಂದ ಯಂತ್ರದಲ್ಲಿ ೪೦ಕ್ಕೂ ಹೆಚ್ಚುಜನ ಗಗನಯಾತ್ರಿಗಳು ೧೦ ಜನ ವಿಜ್ನಾನಿಗಳು ೭೦ಕ್ಕೋ ಅಧಿಕ ಸಾಮಾನ್ಯ ಜನರಿದ್ದರು. ಜೊತೆಯಲ್ಲೇ ಭೋಮಿಯ ವಿವಿಧ ಸಸ್ಯಗಳು, ಮಾನವನಂತೆಯೇ ಇದ್ದ ಸಾಮಾನ್ಯ ಬುದ್ದಿವಂತ ಪ್ರಾಣಿ, ಹಾಗು ಇತರ ಕೆಲವು ಪ್ರಭೇದಗಳಿದ್ದವು. ಈ ಯಂತ್ರ ವನ್ನೇ ಹಿಂಬಾಲಿಸಿದ ಭೂಮಿಯ ಇನ್ನೋಂದು ಯಂತ್ರ ೬ ತಿಂಗಳ ಬಳಿಕ ಬಂದಿಳಿಯಿತು.

ಹೀಗೆ ಪ್ಲಾನೆಟ್ ಎಕ್ಸ್ ನಲ್ಲಿ ಚಿಕ್ಕದಾಗಿ ಜೀವ ಸಂತತಿ ಚಿಗುರೊಡೆಯಿತು. ಸಧ್ಯಕ್ಕೆ ಇಲ್ಲಿಂದ ಪುನಃ ಭೂಮಿಗೆ ಹೋಗಬಲ್ಲ ಯಾವುದೇ ಯಂತ್ರ ಇರಲಿಲ್ಲ ಹಾಗೆಯೇ ಎರೆಡೂ ಗ್ರಹಗಳ ನಡುವಣ ಸಂಪರ್ಕ ಸಾಧ್ಯ ವಿರಲಿಲ್ಲ. ಭುವಿಯಲ್ಲಿದ್ದವರು ತಮ್ಮ ಉಡಾವಣೆ ಯಶಸ್ವಿಯಾಗಿದೆ ಎಂದಷ್ಟೇ ನಂಭಿದ್ದರು..

ಮುಂದುವರೆಯಲಿದೆ.....

No comments:

Post a Comment