Jun 1, 2014

ಚಿತೆ ಸೌದೆ

ಯಾರದೊ ಕೈ ಜಾರಿ ಬಿದ್ದ ಅರೆಬೆಂನ್ದ ಗಾಳಒಂದು
ಉರಿ ಬಿಸಿಲಲಿ ದಾರಿ ಬದಿಯಲಿ
ಮಳೆ ನೀರಲಿ ಬದುಕಿ ಬಂದು
ಮರವಾಗಿ ಬೆಳೆದಿತ್ತು ಗಗನ ತಾಕುವಂತಿತ್ತು
ಕೊಂಬೆಗಳ ಮೆಲಲ್ಲಿ ಹಕ್ಕಿ ಗೂಡುಗಳಿತ್ತು
ಸುಡು ಬಿಸಿಲಲಿ ತಾ ನಿಂತು ಇಳೆಗೆ ತಂಪನು ಕಾ‍ಯ್ದು
ಹಲಸು ತಾ ನಿತ್ತು
ಹಸಿದ ಹೊಟ್ಟೆಯ ಮುನಿಸು ತೀರಿಸುತಿತ್ತು
ಊರ ದನಗಳು ಬರದೆ ಹೊಗವು ಬುಡಕೆ
ಹಣ್ಣು ಹಲಸಿನ ಗಮಕೆ
ಶಾಲೆ ಮಕ್ಕಳು ಮನೆಗೆ ಸೇರುವದೆಂತು
ಮರಕೋತಿಯಾಟ ಮುಗಿಯದೆ ಕತ್ತಲೆ ಕವಿಯದೆ
ಹೀಗೆ ಕಳೆದಿದೆ ಕಾಲ ಸಾಗಿತ್ತು ಬದುಕು
ಊರ ದಣಿಗಳ ಮನೆಯ ಮೂಲೆ ಪಕಾಸಿಗೆಂದು
ಮಾರಮ್ಮನ ಗುಡಿಯ ಬಾಗಿಲಿಗೆಂನ್ದು
ಮೇಜು,ಮಂಚ,ಕುರ್ಚಿಗಳಿಗೆಂನ್ದು
ಹೀಗೆ ರೆಂಬೆ ಕೊಂಬೆಗಳೆಲ್ಲ ಮಾಯವಗಿ
ಕೈಗಳಿಲ್ಲದ ಹಲಸಮ್ಮ ಮಂನ್ಡುಮರವಗಿದೆ
ಪೇಟೆಯಲ್ಲಿ ಹಲಸಿನ ಮರಕೆ ಬಾರಿ ಬೇಡಿಕೆಯಂತೆ
ಇದ ತಿಳಿದು ಸುಮ್ಮನಿರುವರೆ ಜನ
ರಾತ್ರೊ ರಾತ್ರಿ ಕಡಿದು ಸಾಗಿಸಿಯಾಗಿದೆ ಮರವ
ಸೂರ್ಯ ಮೂಡಿದರು ಕಿವಿಗೆ ಕೇಳಿದಸುವಂತಿದೆ
ಕೊಡಲಿ ಏಟಿನ ದ್ವನಿಯು
ಆದರೇನು ಅದೊ ಅಲ್ಲಿ
ಪಟ್ಟಣದ ಯಂತ್ರಗಳ ಹರಿತ ಹಲ್ಲಿಗೆ
ಕೊಟ್ಟಗಿದೆ ಅವಳ ದೇಹವ
ಉಳಿದ ಭೇರುಗಳ ತಲೆದಿಂಬು ತಾಮಾದಡಿ
ಬುಡವ ಆಶ್ರಯಿಸಿ ಮಲಗಿರುವನೋರ್ವ ಮುದಿಯ
ಹಲವು ವರ್ಶಗಳ ನಂತರ
ದೇಶ ವಿದೇಶಗಳ ತಿರುಗಿ ವಿಲಾಸ ಜೀವನವ ಮುಗಿಸಿ
ಇಂದು ರೋಗಿಯಾಗಿ ಜಿಗುಪ್ಸೆಗೊನ್ಡ ತನ್ನ ಮನಕೆ
ಬಾಲ್ಯದ ಯೋಚನೆಗಳು ಬಂನ್ದೊಡನೆ ನೆನಪಯಿತು
ಇದೆ ಮರವಲ್ಲವೆ ಮರಕೋತಿ ಯಾಟದ್ದು
ಪಾಪ ಅವಗೇನು ಗೋತ್ತು ಮುಂನ್ದೆ ಅದೇ ಬುಡವು
ತನ್ನ ಚಿತೆಗೆ ಸೌದಿ ಆಗುವುದೆಂನ್ದು

No comments:

Post a Comment